ನಾಗಕಿರಣ್ ಮತ್ತು ಪ್ರಜ್ಜು ಪೂವಯ್ಯ ಅಭಿನಯದ ಆದರ್ಶ ಚಿತ್ರ ಪೂರ್ಣಗೊಂಡಿದ್ದು ಸದ್ಯದಲ್ಲೇ ತೆರೆಗೆ ಬರುವ ತಯಾರಿಯಲ್ಲಿದೆ. ಚಿತ್ರಬಿಡುಗಡೆಗೂ ಮುನ್ನ ಈ ಸಿನಿಮಾದ ಆಡಿಯೋ ಸಿಡಿ ಬಿಡುಗಡೆ ಮಾಡಲಾಗುತ್ತಿದೆ. ಸಾಯಿಪ್ರಭಾಕರ್ ನಿರ್ದೇಶನದ ಈ ಚಿತ್ರಕ್ಕೆ ರಾಘವ ಉಮೇಶ್ ಛಾಯಾಗ್ರಹಣ, ಬಿ.ಆರ್. ಹೇಮಂತಕುಮಾರ್ ಸಂಗೀತ, ಡಿ.ಆರ್. ರವಿ ಅವರ ಸಂಕಲನವಿದೆ.
ಪ್ರೇಮಕಥೆಯ ಹಂದರವಿರುವ ಈ ಚಿತ್ರಕ್ಕೆ ಈಗಾಗಲೇ ಕಳಸ, ಚಿಕ್ಕಮಗಳೂರು, ಮಲೆನಾಡಿನ ಪ್ರಕೃತಿಯೊಂದಿಗೆ ಬೆಂಗಳೂರಿನ ಸಂಭ್ರಮ ಕಾಲೇಜುಗಳಲ್ಲಿ ಚಿತ್ರೀಕರಣವನ್ನು ನಡೆಸಲಾಗಿತ್ತು. ಈಗ ಬಿಡುಗಡೆಗೆ ತಯಾರಾಗಿರುವ ‘ಆದರ್ಶ ಚಿತ್ರಕ್ಕೆ
ಸೆನ್ಸಾರ್ನಿಂದ ‘ಯು ಅರ್ಹತಾಪತ್ರ ದೊರಕಿದೆ. ನಾಗಕಿರಣ್ ಮತ್ತು ಪ್ರಜ್ಜು ಪೂವಯ್ಯ ಜೊತೆಗೆ ತರಂಗ ವಿಶ್ವ, ಕೆಂಪೇಗೌಡ, ಕುರಿ ರಂಗ, ರಾಮಕೃಷ್ಣ, ಪದ್ಮಾವಾಸಂತಿ ಮತ್ತು ಬ್ಯಾಂಕ್ ಜನಾರ್ಧನ್ ಮುಂತಾದವರ ತಾರಾಗಣವಿದೆ.